Provisional Premium Books
Showing 10081–10110 of 10484 results
ಬೇಟೆಯ ನೆನಪುಗಳು
ಸಾಹಸ ಪ್ರದರ್ಶನದ ಸನ್ನಿವೇಶಗಳೆಡೆಯಲ್ಲಿ ರಸನಿಮಿಷಗಳು ಅಡಕವಾಗಿರುವ ಮಾಧ್ಯಮವು ಕಾಡಬೇಟೆಯಾಗಿದೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯವೇ ಮೊದಲಾದ ನವರಸಗಳಿಗೆ ವಿಪುಲ ಅವಕಾಶವೀಯುವ ರೋಚಕ ಪ್ರಸಂಗ.
ಸಾಹಸ ಪ್ರದರ್ಶನದ ಸನ್ನಿವೇಶಗಳೆಡೆಯಲ್ಲಿ ರಸನಿಮಿಷಗಳು ಅಡಕವಾಗಿರುವ ಮಾಧ್ಯಮವು ಕಾಡಬೇಟೆಯಾಗಿದೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯವೇ ಮೊದಲಾದ ನವರಸಗಳಿಗೆ ವಿಪುಲ ಅವಕಾಶವೀಯುವ ರೋಚಕ ಪ್ರಸಂಗ.
ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ
‘ಧರ್ಮ’ ಎಂಬ ಪದದ ಅರ್ಥದ ಬಗ್ಗೆ ಈಗಲೂ ಅನಿಶ್ಚಿತತೆ ಉಳಿದುಕೊಂಡು ಬಂದಿದೆ. ಶ್ರೀಮತಿ ಎಂ.ಗೈಜರ್ ಮತ್ತು ಪ್ರೊ.ಡಬ್ಲ್ಯುಗೈಜರ್ ಅವರು ತಮ್ಮ ಇತ್ತೀಚಿನ ಕೃತಿಯಲ್ಲಿ ಈ ಅನಿಶ್ಚಿತತೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.ಪಾಳಿ ಪವಿತ್ರ ಗ್ರಂಥಗಳ ಸಾಹಿತ್ಯದಲ್ಲಿ ಈ ಪದ ಕಾಣಿಸಿಕೊಳ್ಳುವ ಪ್ರತಿಯೊಂದು ಸಂದರ್ಭದ ವಿಷಯಾನುಕ್ರಮಣಿಕೆಯನ್ನು ಅವರು ತಯಾರಿಸಿದ್ದಾರೆ; ವೈವಿಧ್ಯಮಯ ಅರ್ಥಗಳ ಒಂದು ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.
ಬ್ಯಾಂಕಿಂಗ್, ಸಹಕಾರ, ವಾಣಿಜ್ಯ ಮತ್ತು ವ್ಯವಹಾರ
ಕರ್ನಾಟಕಕ್ಕೆ ಶ್ರೀಮಂತ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಇದೆ. ಪ್ರಾಚೀನ ಕರ್ನಾಟಕದ ಸಾಕಷ್ಟು ಶಾಸನಗಳು ವ್ಯಾಪಾರಿ ಸರಕುಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತಂತೆ ಉಲ್ಲೇಖಿಸುತ್ತವೆ. ಶಾಸನಗಳು ಆಯಾಕಾಲದಲ್ಲಿ ಚಾಲ್ತಿಯಲ್ಲಿದ್ದ ವಾಣಿಜ್ಯ ಚಟುವಟಿಕೆ, ಸಾಲದ ಮೇಲಿನ ಬಡ್ಡಿದರ, ಸಮುದಾಯ ಜೀವನ ಮುಂತಾದವನ್ನು ಕುರಿತಂತೆ ವಿಪುಲ ಮಾಹಿತಿಯನ್ನು ಒದಗಿಸುತ್ತವೆ. ಅಂದಿನ ಕಾಲದಲ್ಲಿ ದೇವಾಲಯಗಳು, ತಮ್ಮ ಪರಿಸರದಲ್ಲಿ ಸ್ಥಳೀಯ ಬ್ಯಾಂಕುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರಬಿಂದುಗಳಾಗಿದ್ದವು. 20ನೇ ಶತಮಾನದಲ್ಲಿಯೂ ಆಧುನಿಕ ಬ್ಯಾಂಕಿಂಗ್ ಉದ್ಯಮದಲ್ಲಿ ಇಡೀ ದೇಶದಲ್ಲೇ ಕರ್ನಾಟಕವು ಗಮನಾರ್ಹ ಮುನ್ನಡೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಸಂಘಟಿತ ವಲಯದ ಬ್ಯಾಂಕಿಂಗ್ ಉದ್ಯಮದ ಆರಂಭವನ್ನು ಅಂದಿನ ಬೊಂಬಾಯಿ ಪ್ರೆಸಿಡೆನ್ಸಿ ಬ್ಯಾಂಕ್ (1840) (Presidency Bank of Bombay), ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕ್ (Madras Presidency Bank) (1843)ಗಳು ತಮ್ಮ ತಮ್ಮ ಶಾಖೆಗಳನ್ನು ಕ್ರಮೇಣ ಧಾರವಾಡ (1863) ಮತ್ತು ಬೆಂಗಳೂರು ದಂಡುಪ್ರದೇಶ(Cantonment)ಗಳಲ್ಲಿಆರಂಭಿಸಿದ್ದು ಈ ಉದ್ಯಮದ ಆರಂಭದ ಹಂತವನ್ನು ಗುರುತಿಸಲು ನೆರವಾಗುತ್ತದೆ. ಆನಂತರದಲ್ಲಿ ಈ ಪ್ರೆಸಿಡೆನ್ಸಿ ಬ್ಯಾಂಕಿನ ಶಾಖೆಗಳು (ಬೆಳಗಾವಿ (1867), ಮಂಗಳೂರು(1867), ಹುಬ್ಬಳ್ಳಿ(1870)ಹಾಗೂ ಕುಮಟಾಗಳಲ್ಲಿ (1872-73)) ಆರಂಭಗೊಂಡವು. ಮದ್ರಾಸ್ ಬ್ಯಾಂಕಿನ ಮಂಗಳೂರು ಶಾಖೆಯನ್ನು ಬಂದರು ಪ್ರದೇಶದ ಸ್ಥಳೀಯ ವರ್ತಕರ ಅನುಕೂಲಕ್ಕಾಗಿ ಮತ್ತು ಬೊಂಬಾಯಿ ಬ್ಯಾಂಕಿನ ಧಾರವಾಡ ಶಾಖೆಯನ್ನು ಬೊಂಬಾಯಿ ಕರ್ನಾಟಕ ಭಾಗದ ಹತ್ತಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.
ಭರತೇಶನ ದಿನಚರಿ ತಪಸ್ಸಿನ ದಿನಗಳು
ಭರತೇಶ್ವರನು ಷಟ್ಖಂಡದ ಧಾತ್ರೀಪಾಲರನ್ನೆಲ್ಲ ಗೆದ್ದು ಶತ್ರುಗಳೇ ಇಲ್ಲವೆಂಬಂತೆ ಮಿತ್ರಭಾವದಲ್ಲೇ ಭೂಮಿಯನ್ನು ಏಕಛತ್ರದಡಿಯಲ್ಲಿ ಆಳುತ್ತಿದ್ದನು. ಆ ಮಹಾ ಸುಕೃತಿಯು, ನೆರೆದ ಹೆಣ್ಣು ಗಂಡು ಮಕ್ಕಳ ಮದುವೆ ಮಾಡುತ್ತ, ಹಸುಳೆಗಳನ್ನು ಮುದ್ದಾಡುತ್ತ, ಗುಂಗುರು ಕೂದಲಿನ ಆಬಲೆಯರೊಂದಿಗೆ ಲೀಲೆ ಮಾಡುತ್ತ, ಅಕ್ಕರೆಯಿಂದಿದ್ದನು. ದಿನಂಪ್ರತಿ ತೋರುವ ಹೊಸ ರೀತಿಯ ಒಸಗೆಯಾಟಪಾಟಗಳಲ್ಲಿ ಅಸಮ ಪುಣ್ಯದ ಫಲಪಾಕವನ್ನುಂಡು, ಆತ್ಮಸಾಕ್ಷಿಯಲ್ಲದನ್ನು ತೀರಿಸುತ್ತಿದ್ದನು.
ಭರತೇಶನ ದಿನಚರಿ ಸರಸದ ದಿನಗಳು
ಭರತಭೂತಳಕ್ಕೆ ಸಿಂಗಾರವಾದ ಅಯೋಧ್ಯಾಪುರದಲ್ಲಿ ಮೂರು ಲೋಕ ಹೊಗಳುವಂತೆ ಭರತ ಚಕ್ರೇಶ್ವರನು ಸುಖವಾಗಿ ಬಾಳುತ್ತಿದ್ದನು. ಅವನು ಪುರುಪರಮೇಶನ ಹಿರಿಯ ಕುಮಾರ. ನರಲೋಕಕ್ಕೆ ಒಬ್ಬನೇ ರಾಜನಂತಿದ್ದನು. ಅವನು ಹದಿನಾರನೆಯ ಮನು ! ಪ್ರಥಮ ಚಕ್ರೇಶ್ವರ ! ಸುದತಿ ಜನಕ್ಕೆ ರಾಜಮದನ ! ಚದುರರ ತಲೆವಣಿ ! ಇಂತಹವನನ್ನು ಬಣ್ಣಿಸುವುದು ಸುಲಭವಲ್ಲ. ಆ ಚಕ್ರಿ ಕೋಮಲಾಂಗನು; ಹೇಮವರ್ಣನು; ಜಗವೆಲ್ಲ ಕಾಮಿಸತಕ್ಕ ಚನ್ನಿಗನು; ಅಮೋದವುಕ್ಕವ ಜವ್ವನಿಗನು. ಅಷ್ಟೇ ಅಲ್ಲ ಸರ್ವಭೂಮೀಶರೊಡೆಯನು.
ಭಾರತದಲ್ಲಿ ವಿಜ್ಞಾನ ಒಂದು ಐತಿಹಾಸಿಕ ನೋಟ
‘ಸಯನ್ಸ್’ ಶಬ್ದದ ಮೂಲವು ‘ತಿಳುವಳಿಕೆ, ಜ್ಞಾನ’ ಎಂಬರ್ಥದ ‘ಸಯೆಂಶಿಯ’ (Scientia) ಅಥವಾ ‘ಸ್ಕ್ರೈರೆ’ (Scrire) ಎಂಬ ಲ್ಯಾಟಿನ್ ಪದದಿಂದ ಬಂದಿದೆ; ಅದು ‘ವೇದ’ (ತಿಳಿಯುವುದು ಅಥವಾ ಜ್ಞಾನ) ಎಂಬ ಶಬ್ದಕ್ಕೆ ಸದೃಶವಾದುದು.
‘ಸಯನ್ಸ್’ ಶಬ್ದದ ಮೂಲವು ‘ತಿಳುವಳಿಕೆ, ಜ್ಞಾನ’ ಎಂಬರ್ಥದ ‘ಸಯೆಂಶಿಯ’ (Scientia) ಅಥವಾ ‘ಸ್ಕ್ರೈರೆ’ (Scrire) ಎಂಬ ಲ್ಯಾಟಿನ್ ಪದದಿಂದ ಬಂದಿದೆ; ಅದು ‘ವೇದ’ (ತಿಳಿಯುವುದು ಅಥವಾ ಜ್ಞಾನ) ಎಂಬ ಶಬ್ದಕ್ಕೆ ಸದೃಶವಾದುದು.