Provisional Premium Books
Showing 10381–10410 of 10484 results
ಶ್ರೀ ಮ.ರಾಮಮೂರ್ತಿ
ಮ.ರಾಮಮೂರ್ತಿ ಅವರು ಹುಟ್ಟಿದ್ದು ಒಂದು ವೈದಿಕ ಸಂಪ್ರದಾಯವಾದಿ ಕುಟುಂಬದಲ್ಲಿ. ಆದರೆ ಬೆಳೆದದ್ದು ಮಾತ್ರ ಭಿನ್ನವಾಗಿ. ಇವರ ತಂದೆ ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ, ಪತ್ರಿಕೋದ್ಯಮಿಯೂ ಆಗಿದ್ದ ‘ವೀರಕೇಸರಿ’ ಸೀತಾರಾಮ ಶಾಸ್ತ್ರಿಯವರು (1893-1971). ಶಾಸ್ತ್ರಿಯವರ ತಂದೆ ಮದ್ದೂರಿನ ಪುರೋಹಿತಶಾಹಿ ವಂಶಕ್ಕೆ ಸೇರಿದ್ದ ನಾಗೇಶ ಶಾಸ್ತ್ರಿಗಳು. ಶಾಸ್ತ್ರಿಯವರ ತಾಯಿ ನಂಜನಗೂಡಿನ ಪಾರ್ವತಮ್ಮ.
ಶ್ರೀನಿವಾಸ ಜಿ. ಕಪ್ಪಣ್ಣ
ಬದುಕಿನಲ್ಲಿ ಬೆಳಕನ್ನರಿಸಿ, ಕಣ್ತುಂಬ ಕನಸು ಹೊತ್ತ, ನಿರಂತರ ಪರಿಶ್ರಮ, ಛಲದಿಂದ ಕಲಾ ಸಂಸ್ಕೃತಿಗೆ ಬೆಳಕ ಬೀರುವ ಕಾಯಕ ಹಿಡಿದು ಯಶಸ್ವಿಯಾದ ಬಾಲಕನೊಬ್ಬನ ಹೆಜ್ಜೆ ಗುರುತುಗಳು ಈ ಲೇಖನ. ಹೆಜ್ಜೆ ಗುರುತುಗಳಲ್ಲಿ ಬಾಲಕನ ಪೂರ್ವಾಪರಗಳನ್ನು ಹುಡುಕುತ್ತಾ ಹೊರಟರೆ ನಾವು ಮೊದಲು ಹೋಗಿ ತಲುಪುವುದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಬಳಿಯ ಜಲಧಿಗೆರೆ ಎಂಬ ಒಂದು ಸಣ್ಣ ಗ್ರಾಮಕ್ಕೆ.
ಶ್ವಾಸಕೋಶ ಉಸಿರಾಟದ ವ್ಯವಸ್ಥೆ
ಆಹಾರ ಮತ್ತು ನೀರಿನ ಜೊತೆಗೆ ಜೀವದ ಅಸ್ತಿತ್ವಕ್ಕೆ ಗಾಳಿ ಮುಖ್ಯ. ವ್ಯಕ್ತಿಯೊಬ್ಬ ಆಹಾರವಿಲ್ಲದೆ ಅನೇಕ ದಿನಗಳು ಜೀವಿಸಿರಬಹುದಾದರೂ, ಕೆಲವು ದಿನಗಳು ನೀರಿಲ್ಲದೆ ಇರಬಹುದು. ಏಕೆಂದರೆ ಆ ವಸ್ತುಗಳು ದೇಹದ ಊತಕಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಆದರೆ ಮನುಷ್ಯ ದೇಹ ಸದಾ ಗಾಳಿಯನ್ನು ಪಡೆಯುತ್ತಿರಬೇಕು. ಅದಕ್ಕೆ ಕಾರಣ ನಮ್ಮ ದೇಹದಲ್ಲಿರುವ ಗಾಳಿಯು ನಮ್ಮನ್ನು ಮೂರು ನಿಮಿಷಗಳ ಕಾಲ ರಕ್ಷಿಸಲ್ಪಡಬಲ್ಲದು. ಆ ಕಾಲಾವಧಿಯ ನಂತರ ಸಾವು ಸನ್ನಿಹಿತವಾಗುತ್ತದೆ.
ಸಂಜೀವಪ್ಪ ಗಬ್ಬೂರ
ಗಬ್ಬೂರು ಒಂದು ಇತಿಹಾಸ ಪ್ರಸಿದ್ಧ ನಗರ. ಅದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಹೆಸರಾದ ಊರು. ಸಂಸ್ಕೃತಿ ಮತ್ತು ಕಲೆಯನ್ನು ಪರಂಪರೆಯಿಂದ ಪರಂಪರೆಗೆ ಸಾಗಿಸಿಕೊಂಡು ಬಂದ ಅನೇಕ ವ್ಯಕ್ತಿಗಳು ಬಾಳಿ ಬದುಕಿದ ನೆಲ. ಅಲ್ಲಿನ ಮಣ್ಣು ಚಿನ್ನವೆಂದ ಮೇಲೆ ಕೇಳಬೇಕೆ? ಅದೊಂದು ನಿಜಕ್ಕೂ ಸಂಪದ್ಭರಿತ ನಾಡು. ಆ ಊರಲ್ಲಿ ಹುಟ್ಟಿದ ಪ್ರತಿ ಜೀವಿಯೂ ಕಲೆಯನ್ನು ರೆಕ್ಕೆಗಳಂತೆ ಅಂಟಿಸಿಕೊಂಡು ಹುಟ್ಟಿ, ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿಸಿದ ನೆನಪುಗಳು ಸ್ಮರಣೀಯ.
ಸಮಗ್ರ ನೋಟ
ಇತಿಹಾಸದ ಪುಟಗಳನ್ನು ತಿರುವುತ್ತ ನೋಡಿದರೆ ಮೆಚ್ಚುಗೆಯ ಹಾಗೂ ಒಳ್ಳೆಯ ಆಡಳಿತ ಮಾಡಿದ ರಾಮರಾಜ್ಯ, ವಿಜಯನಗರ ರಾಜ್ಯ, ಮೈಸೂರು ಅರಸರ ರಾಜ್ಯ ಇತ್ಯಾದಿ ಅನೇಕರ ಆಡಳಿತವು ಜನತೆಯ ಪ್ರೀತಿ ವಿಶ್ವಾಸ ಹಾಗೂ ಮೆಚ್ಚುಗೆಯನ್ನು ಪಡೆದಿವೆ.
ಇತಿಹಾಸದ ಪುಟಗಳನ್ನು ತಿರುವುತ್ತ ನೋಡಿದರೆ ಮೆಚ್ಚುಗೆಯ ಹಾಗೂ ಒಳ್ಳೆಯ ಆಡಳಿತ ಮಾಡಿದ ರಾಮರಾಜ್ಯ, ವಿಜಯನಗರ ರಾಜ್ಯ, ಮೈಸೂರು ಅರಸರ ರಾಜ್ಯ ಇತ್ಯಾದಿ ಅನೇಕರ ಆಡಳಿತವು ಜನತೆಯ ಪ್ರೀತಿ ವಿಶ್ವಾಸ ಹಾಗೂ ಮೆಚ್ಚುಗೆಯನ್ನು ಪಡೆದಿವೆ.
ಸಮಣ ಸುತ್ತಂ
ವೇದಗಳ ಪೂರ್ವದಲ್ಲೆ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ವೇದ, ಉಪನಿಷತ್, ಭಾಗವತಗಳಲ್ಲಿ ದೊರೆಯುವ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಐದು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸವಿರುವ ಜೈನಧರ್ಮ ಅಂದು ಪ್ರತಿಪಾದಿಸಿದ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ತತ್ವಗಳು ಇಂದಿಗೂ ಆರೋಗ್ಯಕರವಾದ ಸಮಾಜಕ್ಕೆ ಅತ್ಯವಶ್ಯ. ಸಾರ್ವಕಾಲಿಕ ಹಾಗೂ ಸಾರ್ವಭೌಮಿಕವಾದ ಈ ಮಾನವೀಯ ಮೌಲ್ಯಗಳು ಜೈನಧರ್ಮವನ್ನು ಸುದೀರ್ಘಕಾಲ ಜೀವಂತವಾಗಿಡಲು ಕಾರಣವಾಗಿವೆ.
ಸರಹದ್ದುಗಳಿಲ್ಲದ ಸಂತ
ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.
ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.
ಸರ್ ಜೇಮ್ಸ್ ಜಾರ್ಜ್ ಫ್ರೇಜರ್
ಮಾನವ ಕುಲಶಾಸ್ತ್ರಜ್ಞನಾಗಿ ಬಹುದೊಡ್ಡ ಹೆಸರು ಮಾಡಿದ್ದ ಸರ್ ಜೇಮ್ಸ್ ಜಾರ್ಜ್ ಫ್ರೇಜರ್ ಇಂಗ್ಲೆಂಡ್ ದೇಶದವನು. ಹುಟ್ಟಿದ್ದು ಸ್ಕಾಟ್ಲೆಂಡಿನಲ್ಲಿ. ಬುದ್ಧಿಸಾಧನೆಗಳಿಂದ ಅಸಾಧಾರಣ ವ್ಯಕ್ತಿತ್ವ ಗಳಿಸಿದ್ದು ಇಂಗ್ಲೆಂಡಿನಲ್ಲಿ. ಶೈಕ್ಷಣಿಕ ರಂಗದಲ್ಲಿ ಸಾಮಾಜಿಕ ಮಾನವ ಶಾಸ್ತ್ರಜ್ಞನೆಂದೇ ಪ್ರಸಿದ್ಧನಾದವನು. ಆದರೂ ಜಾನಪದ ಮತ್ತು ಮಾನವಕುಲಶಾಸ್ತ್ರಗಳಿಗೂ ತನ್ನ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಂಡವನು.