ಸಾಮ್ರಾಜಶಾಹಿ ರಾಜವಂಶಗಳ ಯುಗ
ಈ ಅವಧಿಯಲ್ಲಿ, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು ಹಾಗೂ ಹೊಯ್ಸಳರು ಕರ್ನಾಟಕದಲ್ಲಿ ಬಲಿಷ್ಠ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳೆರಡರ ಸುಭಿಕ್ಷತೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಯತನಕ, ಕರ್ನಾಟಕದ ಅರಸರು ಕರ್ನಾಟಕದ ಗಡಿಪ್ರದೇಶಗಳ ಒಳಗೆ ಆಳ್ವಿಕೆ ನಡೆಸಿದ್ದರು. ಆದರೆ, ಈ ರಾಜವಂಶಗಳ ಆಗಮನದಿಂದ, ದಕ್ಷಿಣಪಥದ ಬಹುತೇಕ ಭಾಗದ ಮೇಲೆ ನಿಯಂತ್ರಣ ಸಾಧಿಸಲು ಇವರಿಗೆ ಸಾಧ್ಯವಾಯಿತು. ತಮ್ಮ ಸಾಮ್ರಾಜ್ಯಗಳನ್ನು ಉತ್ತರಕ್ಕೆ ಹಾಗೂ ದಕ್ಷಿಣ ಭಾರತದ ತಮಿಳುನಾಡಿನವರೆಗೂ ವಿಸ್ತರಿಸಿಕೊಂಡರು. ರಾಜಕೀಯ ಬಲ ಹಾಗೂ ಆರ್ಥಿಕ ಸಮೃದ್ಧಿಯೆಂದು ಗುರುತಿಸಲ್ಪಡುವ ಈ ಅವಧಿಯು, ಸಾಹಿತ್ಯ, ಕಲೆ ಹಾಗೂ ವಾಸ್ತು ನಿರ್ಮಾಣ ಕ್ಷೇತ್ರಗಳ ಅಭಿವೃದ್ಧಿಗೂ ಸಾಕ್ಷಿಯಾಯಿತು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ನೀಲಾ ಮಂಜುನಾಥ್ |
Publisher |
ಕರ್ನಾಟಕ ಸರ್ಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
You must be logged in to post a review.
Reviews
There are no reviews yet.