Kannada Rare Books
Showing 991–1020 of 1050 results
ಸಾವಳಗಿ ಮಹ್ಮದಸಾಬ
ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ.
ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ.
ಸಾಹಿತ್ಯ ಮತ್ತು ಸಂಸ್ಕೃತಿ
ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ವಿಶಾಲವಾದ ಬಯಲು ಪ್ರದೇಶದಿಂದ ಕೂಡಿದ್ದು ಇಲ್ಲಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ವೈವಿಧ್ಯ ಶಿಲ್ಪಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಲಲಿತ ಕಲೆಗಳ ಬೀಡೆನಿಸಿದ್ದು ಜನಪದ, ಯಕ್ಷಗಾನ, ರಂಗಭೂಮಿಗಳ ತ್ರಿವೇಣಿ ಸಂಗಮವಾಗಿದೆ. “ಕಲ್ಪತರು ನಾಡು” ಎಂಬ ಅನ್ವರ್ಥನಾಮವನ್ನು ಹೊಂದಿದ್ದು ಗಂಗರಸ ದುರ್ವಿನೀತನ ಕಾಲದ ತಾಮ್ರಶಾಸನವೊಂದರಲ್ಲಿ ಉಲ್ಲೇಖಿತವಾಗಿರುವಂತೆ ‘ಸುಜನ ಜನಪದ’ರೆಂಬ ನುಡಿಗಟ್ಟನ್ನು ಅರ್ಥವತ್ತಾಗಿಸಿದೆ. ಕರ್ನಾಟಕದ ಪ್ರಮುಖ ರಾಜಮನೆತನವಾದ ಗಂಗರ ಆಳ್ವಿಕೆಗೆ ಜಿಲ್ಲೆಯ ದಕ್ಷಿಣಭಾಗವು ಒಳಪಟ್ಟಿದ್ದು ಅವರ ಕಾಲದ ಶಾಸನ, ವಾಸ್ತುಶಿಲ್ಪಗಳು ಇಂದಿಗೂ ಉಳಿದು ಬಂದಿವೆ. ಈ ಮನೆತನದೊಂದಿಗೆ ರಕ್ತಸಂಬಂಧವಿರಿಸಿಕೊಂಡಿದ್ದ ನೊಳಂಬರು ಜಿಲ್ಲೆಯ ಪೂರ್ವಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಆ ಭಾಗದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಶಾಸನೋಕ್ತವಾಗಿವೆ. ನೊಳಂಬರ ರಾಜಧಾನಿಯಾಗಿದ್ದ ಹೇಮಾವತಿಯು (ಹೆಂಜೇರು–ಮಡಕಶಿರಾ ತಾಲೂಕು, ಅನಂತಪುರ ಜಿಲ್ಲೆ, ಆಂಧಪ್ರದೇಶ) ಹಿಂದೆ, ತುಮಕೂರು ಜಿಲ್ಲೆಯಲ್ಲಿಯೇ ಇದ್ದು, ಜಿಲ್ಲೆಯ ಹಲವೆಡೆ ನೊಳಂಬರ ವಾಸ್ತುಶಿಲ್ಪ ಪ್ರಭಾವ ಕಂಡುಬರುತ್ತದೆ. ರಾಷ್ಟ್ರಕೂಟ ಕೃಷ್ಣನ ಗುಬ್ಬಿ ತಾಮ್ರಶಾಸನವು ಅವರ ವಂಶಾವಳಿ ಹಾಗೂ ಎಲ್ಲೋರಾದಲ್ಲಿ ನಿರ್ಮಾಣಗೊಂಡ ದೇವಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುವ ಅಪೂರ್ವ ಶಾಸನವಾಗಿದೆ.
ಸಿ. ಜಿ. ಕೃಷ್ಣಸ್ವಾಮಿ
ಸಿ. ಜಿ. ಕೆ. – ಕೃಷ್ಣಸ್ವಾಮಿ ಆಧುನಿಕ ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರು. ರಂಗ ಸಂಘಟಕರಾಗಿ, ರಂಗ ನಿರ್ದೇಶಕರಾಗಿ, ಬೆಳಕಿನ ವಿನ್ಯಾಸಕಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ವಿಶಿಷ್ಟ ಸ್ಥಾನ, ಮಾನ ಗಳಿಸಿಕೊಂಡಿದ್ದಾರೆ. ಯಾವುದೇ ಶಾಸ್ತ್ರೀಯ ರಂಗತರಬೇತಿ, ಔಪಚಾರಿಕ ಅಧ್ಯಯನ ಇಲ್ಲದೆ, ಸ್ವಂತ ಪ್ರತಿಭೆ, ಪರಿಶ್ರಮ ಮತ್ತು ಕಲ್ಪಕತೆಗಳ ಮೇಲೆ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಂಡವರು.
ಸಿಕ್ಲಿಗರ
ಈಗಾಗಲೇ ಹಲವಾರು ಬುಡಕಟ್ಟು ಸಮುದಾಯಗಳ ಕುರಿತಾಗಿ ಅಧ್ಯಯನಗಳು ನಡೆದಿದೆ. ಆದರೆ ಅಧ್ಯಯನ ನಡೆಯಬೇಕಾದ ಸಮುದಾಯಗಳು ಸಾಕಷ್ಟಿವೆ. ಅಂತಹ ಸಮುದಾಯಗಳಲ್ಲಿ ಸಿಕ್ಲಿಗರ ಸಮುದಾಯವು ಒಂದಾಗಿದೆ. ಇವರಿಗೆ ಸಿಕ್ಲಿಗರೆಂದು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕಾರಣ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದಲ್ಲಿ ಇವರನ್ನು ಮೀಸಲಾತಿಯ ಯಾವುದೇ ಪಟ್ಟಿಗೂ ಇದುವರೆಗೂ ಸೇರಿಸಿರುವುದಿಲ್ಲ. ಮೊದಲಿಗೆ ಇವರನ್ನು ಅಪರಾಧಿ ವರ್ಗಕ್ಕೆ ಸೇರಿಸಲಾಗಿತ್ತು. ಏಕೆಂದರೆ ಇವರು ತಲವಾರ, ಖಡ್ಗ, ಚಾಕು, ಚೂರಿಗಳನ್ನು ತಯಾರಿಸುವುದರಿಂದ ಹೆಚ್ಚು ಜನರು ಇವರನ್ನು ಅನುಮಾನದಿಂದಲೆ ನೋಡುತ್ತಿದ್ದರು.
ಸುಕ್ರಿಬೊಮ್ಮಗೌಡ
ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ
ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ
ಸುಡುಗಾಡು ಸಿದ್ಧ
ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಜನಪದ ತಜ್ಞರು ಹೀಗೆ ನಾನಾ ನಮೂನೆಯ ವಿದ್ವಾಂಸರು ಹಿಂದಿನಿಂದಲೂ ಸಮುದಾಯಗಳ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ವಿದ್ವಾಂಸರ ಅಧ್ಯಯನಗಳಲ್ಲಿ ಯಾವುದೋ ಒಂದು ಕೊರತೆಯಂತೂ ಕಂಡುಬರುತ್ತದೆ. ಎಷ್ಟೋ ಬಾರಿ ವಿದ್ವಾಂಸರಿಗೆ ಮಾಹಿತಿ ನೀಡುವಾಗ ಸಮುದಾಯದ ಮಾಹಿತಿದಾರರು ಸಂಕೋಚಪಟ್ಟು ಮಾಹಿತಿಗಳನ್ನು ಪೂರ್ಣವಾಗಿ ಕೊಡದೇ ಹೋಗುವ ಸಾಧ್ಯತೆಗಳಿರುತ್ತವೆ.
ಸುವರ್ಣ ಕರ್ನಾಟಕ ರಾಜಕೀಯ ಸಿಂಹಾವಲೋಕನ
ಭಾರತ ೧೯೪೭ರ ಆಗಸ್ಟ್ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.
ಭಾರತ ೧೯೪೭ರ ಆಗಸ್ಟ್ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.
ಹಕ್ಕಿಪಿಕ್ಕಿ
ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್ ನಿಘಂಟಿನಲ್ಲಿ ‘ಹಕ್ಕಿಯನ್ನು ಹೆಕ್ಕ’ ಎಂಬ ಅರ್ಥದಿಂದ ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು.
ಹಬ್ಬದ ಹಾಡುಗಳು(ಸಂಪುಟ-೨)
1. ಗಂಗಿ ಗೌರೀ ಹಾಡು ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳs ಹುಲಗೆಜ್ಜೆ | ಕೋಲ || 1 || ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿsನ ತರವೋs ನಡದಾರ | ಕೋ || 2 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ | ಲಿಂಗಕೊಂದ್ಹೊವs ದಯಮಾಡ | ಕೋ || 3 || ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ || ನಮ್ಮವ್ವ ನಮಗs ಬೈದಾಳ | ಕೋ || 4 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ || ಲಿಂಗಕ್ಕೆರಡ್ಹೊವs ದಯಮಾಡ | ಕೋ || 5 ||
ಹಮ್ಮು-ಬಿಮ್ಮು
ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ.
ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ.